ಶುಕ್ರವಾರ, ಜುಲೈ 4, 2014

ತ್ರಿವೇಣಿ : ನೀನಾ ಭಗವಂತ : Neena Bhagavanta

ಹಾಡು: ನೀನಾ ಭಗವಂತ 
ಚಲನಚಿತ್ರ: ತ್ರಿವೇಣಿ 
ಸಂಗೀತ ನಿರ್ದೇಶಕರು: ಉಪೇಂದ್ರ ಕುಮಾರ್
ಕವಿ: ಹಂಸಲೇಖ

ವರ್ಷ: 1973
ಹಾಡುಗಾರರು: 
ಜಿ.ಬಾಲಕೃಷ್ಣ, ಎಚ್.ಪಿ ಗೀತ
ಪಾತ್ರದಾರಿಗಳು: ಉದಯಕುಮಾರ್, ಕಲ್ಪನಾ
ಚಿತ್ರದ ನಿರ್ದೇಶಕರು: 
ಎಂ.ಎನ್.ಪ್ರಸಾದ್

ನಿರ್ಮಾಪಕರು: ನಾಗರಾಜ ಆರ್ಟ್ಸ್ ಪ್ರೊಡಕ್ಶನ್ಸ್ (ಡಿ.ಜಿ. ನಾಗರಾಜ್)

ನೀನಾ ಭಗವಂತ ನೀನಾ ಭಗವಂತ
ಜಗಕುಪಕರಿಸಿ ನನಗಪಕರಿಸೊ ಜಗದೋದ್ಧಾರಕ ನೀನೇನಾ 
ನೀನೇನಾ ನೀನಾ ಭಗವಂತ ||ಪ||

ಗೋರ್ಕಲ್ಲಿಗೆ ಗುಡಿ ಮಂದಿರ ನೂರು 
ಮಾಡಿದ ನರನಿಗೆ ನೆಲೆಯಿಲ್ಲ 
ಹೂ ಸೌಗಂಧವ ಲೇಪಿಸಿ ಹಾಡಿ 
ಕರೆದರು ಕರುಣಿಸೆ ಕೃಪೆಯಿಲ್ಲ 
ನೀನಾ ಭಗವಂತ ||೧||

ನಂದನ ಬದುಕು ನರಕ ಮಾಡಿದರೂ
ಸ್ವರ್ಗಕೆ ಒಯ್ಯುವ ಮನಸಿಲ್ಲ
ಹಾಲಾಹಲದ ವಾನಲ ದೂಡಿ
ನಶಿಸದರೂ ನೀ ಕಂಡಿಲ್ಲ
ನೀನಾ ಭಗವಂತ ||2||

ನಶ್ವರ ಭೋಗದ ಆಸೆ ಕಡಲಲಿ 
ತೇಲಿಸಿ ಮುಳುಗಿಸಲೇಕಯ್ಯ 
ಅಂತರ ತಿಳಿಯದೆ ಪಾಲಿಸುವವಗೆ 
ದೈವೋತ್ತಮ ಬಿರುದೇಕಯ್ಯ 
ನೀನಾ ಭಗವಂತ ||೩||

ಎಚ್.ಪಿ ಗೀತ : ಸಿರಿ ನಂದನ ಸಿರಿ ನಂದನ 
ಏನ ಕೇಳಲೆ ನಾ 
ಓ ದಯಾಳು ಬರಿದು ಬಾಳು 
ಕರುಣಿಸೊ ಎನಗು ಜೀವನ 
ಸಿರಿ ನಂದನ 

ಜನನ ಮರಣ ಬಾಳ ಪಥದಿ 
ಹರಿಸಿ ಸಾಗುವೆ ವಿನಾ 
ಕರುಣೆ ಮಮತೆ ತೋರಿ ಇಹದೆ 
ಸಲಹಿ ಕದಡುವೆ ಮನಾ 
ಇರುವೆ ಎಲ್ಲಿ ಶೂನ್ಯ ಜಗದಿ 
ಪ್ರಸರಿಸೊ ಶಾಂತನ 
ಸಿರಿ ನಂದನ ||೪||

Labels: Neena Bhagavanta, Triveni, Upendra Kumar, Hamsalekha,  1973, Udayakumar, Kalpana, Narasimharaju

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ