ಶುಕ್ರವಾರ, ಜುಲೈ 4, 2014

ಶಿವಸೈನ್ಯ : ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ : Chikkamagalura Chikka Mallige

ಹಾಡು: ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಚಲನಚಿತ್ರ: ಶಿವಸೈನ್ಯ
ಸಂಗೀತ ನಿರ್ದೇಶಕರು: ಇಳೆಯರಾಜ
ಕವಿ: 
ಶ್ಯಾಮಸುಂದರ್ ಕುಲಕರ್ಣಿ
ವರ್ಷ: 1996
ಹಾಡುಗಾರರು:  
ಇಳೆಯರಾಜ, ಚಿತ್ರಾ
ಪಾತ್ರದಾರಿಗಳು: ಶಿವರಾಜಕುಮಾರ್, ನಿವೇದಿತಾ ಜೈನ್, ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ಅರುಂಧತಿ ನಾಗ್, ಲೋಕನಾಥ್
ಚಿತ್ರದ ನಿರ್ದೇಶಕರು: ಶಿವಮಣಿ

ನಿರ್ಮಾಪಕರು: ಯಶಿ ಎಂಟರ್ಪ್ರೈಸಸ್ (ವೈ.ಎಸ್. ರಮೇಶ್)


ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಲಕ್ಕಿ ಈ ಲಕುಮಿಯೋ
ರಂಬೆ ಇವಳ ಮಮ್ಮಿಯೊ
ಕಣ್ಣಲ್ಲೆ ಹಾ ಹುಣ್ಣಿಮೆ ಬೆಳಕೊ

ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ  ||ಪ||

ಕೋಲು ಕೋಳಣ್ಣ ಕೋಲೆ ಕೋಲೆ ಕೋಲೆ
ಹಂಸ ಕೋಗಿಲೆಗೊಂದು ಓಲೆ ಓಲೆ
ಓಲೆ ತುಂಬೆಲ್ಲ ಪ್ರೀತಿ ಸಾಲೆ ಸಾಲೆ
ಸಾಲು ಓದುತ್ತ ಹೊಯ್ತು ವೇಳೆ ವೇಳೆ
ಸುವಿ ಸುವಿ ಸುವ್ವಾಲೆ, ಪ್ರೀತಿ ಆಸೆ ಉಯ್ಯಾಲೆ
ಸವಿ ಸವಿ ಜೇನಿಲ್ಲೆ, ತುಟಿ ತುಟಿಯಾಮೇಲೆ
ಗಂಗೆ ಆಕಾಶ ಗಂಗೆ, ಹಿಂಗೆ ಬೀಳುತ್ತ ನಂಗೆ
ಸೋನೆ ಸೋಬಾನೆ ಹಾಡಿತು ಉಯ್ಯಲಾಲ ||೧||

ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಕುಕ್ಕುಕ್ಕು ಕೋಕಿಲಾ, ಚಿತ್ತವೆಲ್ಲ ಚಂಚಲ
ಏನೆಂದು ನಾ ಹೇಳಲಾರೆ
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ ||ಪ||

ಗಾಳಿ ತಂಗಾಳಿ ಬಂದು ಕಿವಿಗ್ಹೇಳಿತು
ಏನು ಏನೆಂದು ನಿನ್ನ ಮನ ಕೇಳಿತು
ತಂತಿ ತಂಬೂರಿ ಮೀಟಿ ರಾಗ ತಂದಿತು
ಜೋಡಿ ಕೊಂಡಾಡಿ ಪ್ರೇಮ ಲಾಲಿ ಹಾಡಿತು
ಬೆಳ್ಳಿ ಮೋಡ ಪನ್ನೀರ ಚೆಲ್ಲಿತ್ತು ಬಾನಿಂದ
ಪ್ರೇಮವೆಂಬ ಹೂ ಗಂಧ, ಜನ್ಮ ಜನ್ಮದಾ ಬಂಧ
ಕಣ್ಣ ಮುಚ್ಚಾಲೆಯಲ್ಲಿ ಕಂಡು ಕಂಡಿಲ್ಲ ಒಂದು
ಜೀವ ಜೀವದ ಸಂಗಮ ಭೂಮಿಯೆಲ್ಲ ||೨||

Labels: Chikkamagalura Chikka Mallige, Shivasainya, Ilayaraja, Shyamasundara Kulkarni, 1996, Shivarajkumar, Nivedita Jain, Mukhyamantri Chandru, Doddanna, Arundhati Nag, Lokanath

ಒಂದೇ ರೂಪ ಎರಡು ಗುಣ : ಝಿಲ ಝಿಲನೆಂದು : Jhila Jhilanendu

ಹಾಡು: ಝಿಲ ಝಿಲನೆಂದು 
ಚಲನಚಿತ್ರ: ಒಂದೇ ರೂಪ ಎರಡು ಗುಣ
ಸಂಗೀತ ನಿರ್ದೇಶಕರು: ಸಲೀಲ್ ಚೌಧರಿ
ಕವಿ: ಕು.ರಾ. ಸೀತಾರಾಮ ಶಾಸ್ತ್ರಿ

ವರ್ಷ: 1975
ಹಾಡುಗಾರರು:  ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಸುಶೀಲ

ಪಾತ್ರದಾರಿಗಳು: ವಿಷ್ಣುವರ್ಧನ್, ಚಂದ್ರಕಲಾ, ಭವಾನಿ, ನರಸಿಂಹರಾಜು, ಬಾಲಕೃಷ್ಣ, ಚಂದ್ರಶೇಖರ್, ಶಿವರಾಂ
ಚಿತ್ರದ ನಿರ್ದೇಶಕರು: ಎ. ಎಂ. ಸಮೀಉಲ್ಲಾ

ನಿರ್ಮಾಪಕರು: ಭವ ಮೂವೀಸ್ (ಎ. ಎಂ. ಸಮೀಉಲ್ಲಾ)


ಪಿ.ಸುಶೀಲ : ಝಿಲ ಝಿಲನೆಂದು ಚಲಿಸುತ ಮುಂದು 
ನದಿ ಇದು ಎಂದೂ ಹರಿಯುತಿದೆ ಎಲ್ಲಿಗೆ 
ಎಸ್.ಪಿ. : ಗಿರಿಯನು ಇಳಿದು ಬಯಲಲಿ ನಡೆದು 
ಇನಿಯನ ಅರಸಿ ಸಾಗರದ ಕಡೆಗೆ  ||ಪ||

ಪಿ.ಸುಶೀಲ: ನದಿಯಲ್ಲಿ ನೀರಾಡಿ ಓಡಿದೆ ತಂಗಾಗಳಿಯು ತಾನೆಲ್ಲಿಗೆ 
ಎಸ್.ಪಿ. : ಕರಿ ಮೋಡ ಬಾನಿಂದ ಭೂಮಿಗೆ ಬಿತ್ತೆನ್ನುತ ಬಂತಿಲ್ಲಿಗೆ 
ನಿನ್ನಯ ಕೂದಲಿನ ಈ ಮೋಡಿಗೆ ||೧||

ಪಿ.ಸುಶೀಲ: ಮರದಿಂದ ಅದೇಕೆ ಉದುರಿದೆ ಹೂವೆಲ್ಲವು ಭುಮಿಗಿಂದು 
ಎಸ್.ಪಿ. : ನಡೆದು ನೀ ಬಂದಾಗ ಚೆಲುವೆ ನಿನ್ನೀ ಪಾದ ನೊಂದೀತೆಂದು 
ಹೂವಿನ ಹಾಸಿಗೆಯ ತಾ ಹಾಸಿದೆ ||೨||

ಪಿ.ಸುಶೀಲ: ಇರುಳಂತೆ ನಂಗೆಲ್ಲ ಬೆಳಕಿನ ಸ್ವರೂಪವು ತಾನೆನಂತೆ 
ಎಸ್.ಪಿ. : ಕಂಗಳಿಗೆ ಬೆಳಕು ರವಿ ಶಶಿ ಹೊಂದಾರೆಯು ದೀಪವಂತೆ 
ಹೃದಯಕೆ ಪ್ರೇಮವದೆ ಹೊಂಬೆಳಕು  ||೨||

Labels: Jhila Jhilanendu, Onde Rupa Eradu Guna, Salil Chowdhary, Ku.Ra. Seetarama Shastry, 1975, Vishnuvardhan, Chandrakala, Bhavani, Narasimharaju, Balakrishna, Chandrashekhar, Shivaram

ಮಾವನ ಮಗಳು : ನಾನೇ ವೀಣೆ ನೀನೇ ತಂತಿ : Naane Veene Neene Tanti

ಹಾಡು: ನಾನೇ ವೀಣೆ ನೀನೇ ತಂತಿ
ಚಲನಚಿತ್ರ: ಮಾವನ ಮಗಳು
ಸಂಗೀತ ನಿರ್ದೇಶಕರು: ಟಿ. ಚಲಪತಿ ರಾವ್
ಕವಿ: ಕುವೆಂಪು

ವರ್ಷ: 1965
ಹಾಡುಗಾರರು: ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ
ಪಾತ್ರದಾರಿಗಳು: ಕಲ್ಯಾಣ್ ಕುಮಾರ್, ಜಯಲಲಿತಾ, ನರಸಿಂಹರಾಜು, ರಂಗ
ಚಿತ್ರದ ನಿರ್ದೇಶಕರು: ಎಸ್. ಕೆ. ಎ. ಚಾರಿ

ನಿರ್ಮಾಪಕರು: ಪಿ.ಎ.ಪಿ. (ಎ.ವಿ. ಸುಬ್ಬರಾವ್)

ನಾನೇ ವೀಣೆ ನೀನೇ ತಂತಿ 
ಅವನೇ ವೈಣಿಕ ||ಪ||

ಮಿಡಿದನೆನಲು ರಸದ ಹೊನಲು 
ಬಿಂದು ಬಿಂದು ಸೇರಿಸಿಂತು 
ನಾದ ರೂಪ ತಾ ||೧||

ಭುವನವೆಲ್ಲ ಸವಿಯಸೊಲ್ಲ ಕವಿಯ ಗಾನ
ನನ್ನ ನಿನ್ನ ಹೃದಯ ವೀಣಾ 
ಕಲ್ಲಿಜೇನ ಸೊಗದಸ್ನಾನ ಅಮೃತಪಾನ ||೨||

Labels: Naane Veene Neene Tanti, Mavana Magalu, T. Chalapati Rao, KuVemPu,  1965, Kalyan Kumar, Jayalalita, Narasimha Raju, Ranga

ಮಿಸ್ ಲೀಲಾವತಿ : ದೋಣಿ ಸಾಗಲಿ ಮುಂದೆ ಹೋಗಲಿ : Doni Sagali Munde Hogali

ಹಾಡು: ದೋಣಿ ಸಾಗಲಿ ಮುಂದೆ ಹೋಗಲಿ 
ಚಲನಚಿತ್ರ: ಮಿಸ್ ಲೀಲಾವತಿ 
ಸಂಗೀತ ನಿರ್ದೇಶಕರು: ಆರ್. ಸುದರ್ಶನಂ
ಕವಿ: ಕುವೆಂಪು

ವರ್ಷ: 1965
ಹಾಡುಗಾರರು: ಎಸ್. ಜಾನಕಿ, ರಾಮಚಂದ್ರ ರಾವ್
ಪಾತ್ರದಾರಿಗಳು: ಜಯಂತಿ, ರಮೇಶ್, ಅಶ್ವಥ್, ನರಸಿಂಹರಾಜು
ಚಿತ್ರದ ನಿರ್ದೇಶಕರು: ಎಂ. ಆರ್. ವಿಠಲ್

ನಿರ್ಮಾಪಕರು: ಕಲಾಜ್ಯೋತಿ

ದೋಣಿ ಸಾಗಲಿ ಮುಂದೆ ಹೋಗಲಿ 
ದೂರ ತೀರವ ಸೇರಲಿ 
ಬೀಸು ಗಾಳಿಗೆ ಬೀಳುತೇಳುವ 
ತೆರೆಯ ಮೇಗಡೆ ಹಾರಲಿ ||ಪ||

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸೆ 
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸೆ 
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ 
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ ||೧|| 

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ 
ಮಿಂಚುತೀರ್ಪುವು ಮೂಡುತೈತರೆ ಬಾಲಕೋಮಲ ದಿನಮಣಿ 
ಹಸಿರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿದೆ 
ಹುದುಗಿ ಹಾಡುವ ಮತ್ತ ಕೋಕಿಲ ಮಧುರ ವಾಣಿಯ ತರುತಿದೆ ||೨|| 

ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ 
ಅದನೆ ಹೋಲುತ ಅಂತೆ ತೇಲುತ ದೋಣಿಯಾಟವನಾಡಿರಿ 
ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ 
ನೆನ್ನೆ ನೆನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ ||೩||

Labels: Doni Sagali Munde Hogali, Miss Leelavati, R. Sudarshanam, KuVemPu,  1965, Jayanti, Ramesh, Ashwath, Narasimha Raju

ಒಂದೇ ರೂಪ ಎರಡು ಗುಣ : ಓ ಉಡಾಳಾ ಸಡಾಳಾ : O Udala Sadala

ಹಾಡು: ಓ ಉಡಾಳಾ ಸಡಾಳಾ  
ಚಲನಚಿತ್ರ: ಒಂದೇ ರೂಪ ಎರಡು ಗುಣ
ಸಂಗೀತ ನಿರ್ದೇಶಕರು: ಸಲೀಲ್ ಚೌಧರಿ
ಕವಿ: ಕು.ರಾ. ಸೀತಾರಾಮ ಶಾಸ್ತ್ರಿ

ವರ್ಷ: 1975
ಹಾಡುಗಾರರು: ಎಸ್. ಜಾನಕಿ, ಮೋಹನ್

ಪಾತ್ರದಾರಿಗಳು: ವಿಷ್ಣುವರ್ಧನ್, ಚಂದ್ರಕಲಾ, ಭವಾನಿ, ನರಸಿಂಹರಾಜು, ಬಾಲಕೃಷ್ಣ, ಚಂದ್ರಶೇಖರ್, ಶಿವರಾಂ
ಚಿತ್ರದ ನಿರ್ದೇಶಕರು: ಎ. ಎಂ. ಸಮೀಉಲ್ಲಾ

ನಿರ್ಮಾಪಕರು: ಭವ ಮೂವೀಸ್ (ಎ. ಎಂ. ಸಮೀಉಲ್ಲಾ)

ಓ ಉಡಾಳಾ ಸಡಾಳಾ 
ಆಡಿಸಿ ಕಾಡಿಸಿ ಕೆಂಗೆಡಿಸಿ ಭ್ರಮೀಸಿ ಶ್ರಮೀಸಿ 
ಮೈ ಕೈ ಸೋಕಿಸಿ ರಮೀಸಿ ಕದ್ದೆಯಾ ನನ್ನೆದೆಯಾ ||ಪ||

ಸಪೂರಾ ಮನಸನು ದೋಚಿದ ಚೋರ 
ಅಪಾರಾ ಮೋಡಿಯ ಹೂಡಿದಿ ಪೋರ
ನೀ ತೋಳನಂತೆ ಹಾರಿದರೆ ಕುಣಿಯ ಬಡಿಯೆ ನಾನು 
ಗಂಟಲೊಣಗಿ ಸೊಂಟ ನಡುಗಿ ತುಂಟ ನಿನ್ನ ಚೇಷ್ಟೆಗೆ 
ಅದರಿ ಬೆದರಿದೆ ||೧||

ಮೋಹನ್: ಇದೆಲ್ಲಾ ಏರಿ ಬಂದ ಯೌವನ್ನದ ಸೊಂಪು 
ಅದೇಕೆ ಮುಪ್ಪಿನೆದೆಗು ತಪ್ಪದಂತ ಕಂಪು 
ಬರಿ ಒಣ ಚಪಲದಿಂದ ಏನೂ ಸಾಗದು 
ಹುಣಿಸೆ ಮರಕೆ ಮುಪ್ಪು ಬಂದರೇನು ಹುಳಿಯು ಹೋಗದು 
ತಕಿಟ ದಿಕಿಟ ತೋಂ  ||೨||

Labels: O Udala Sadala, Onde Rupa Eradu Guna, Salil Chowdhary, Ku.Ra. Seetarama Shastry, 1975, Vishnuvardhan, Chandrakala, Bhavani, Narasimharaju, Balakrishna, Chandrashekhar, Shivaram

ಒಂದು ಹೆಣ್ಣಿನ ಕಥೆ : ಸಾಗರಕೆ ಚಂದಿರ ತಂದ : Sagarake Chandira Tanda

ಹಾಡು: ಸಾಗರಕೆ ಚಂದಿರ ತಂದ 
ಚಲನಚಿತ್ರ: ಒಂದು ಹೆಣ್ಣಿನ ಕಥೆ
ಸಂಗೀತ ನಿರ್ದೇಶಕರು: ಟಿ.ಜಿ. ಲಿಂಗಪ್ಪ
ಕವಿ: ಆರ್.ಎನ್. ಜಯಗೋಪಾಲ್

ವರ್ಷ: 1972
ಹಾಡುಗಾರರು: 
ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಪಾತ್ರದಾರಿಗಳು: ರಾಜೇಶ್, ಜಯಂತಿ, ರಾಜಮ್ಮ, ಬಿ.ವಿ. ರಾಧಾ, ಸುದರ್ಶನ್
ಚಿತ್ರದ ನಿರ್ದೇಶಕರು: ಬಿ.ಆರ್. ಪಂತುಲು

ನಿರ್ಮಾಪಕರು: ಪದ್ಮಿನಿ ಪಿಚ್ಚರ್ಸ್ (ಬಿ.ಆರ್. ಪಂತುಲು)

ಎಸ್.ಪಿ. : ಸಾಗರಕೆ ಚಂದಿರ ತಂದ ಪ್ರಥಮ ಚುಂಬನ
ಜಾನಕಿ: ಒಡಲಿನಲ್ಲಿ ಮಿಂಚಿನಂತೆ ಮಧುರ ಕಂಪನ ||ಪ||

ಎಸ್.ಪಿ. : ಬೆಳ್ಳಿತಾರೆ ತೋರಣ ನೀ ತಂದ ಸ್ತ್ರೀಧನ
ಅರಳಿನಿಂತ ಹೂ ಬನ ನೀ ನಗಲು ಈ ಮನ
ಮೈಗಂಪಲಿ ಕಾಣುವೆ ನಾ, ನರುಗಂಪಿನ ಚಂದನ ||೧||

ಜಾನಕಿ: ಹೃದಯ ತಂತಿ ತಾನ ಮಿಡಿದ ಭಾವ ನೂತನ
ಬಳ್ಳಿಯಂತೆ ಬಳಸಿರಲು, ಬಾಹುಗಳ ಬಂಧನ
ಮುಡಿದ ಮಲ್ಲೆ ಉದುರುತಿರೆ ಒಲವಿನ ಸಂಧಾನ ||೨||

Labels: Sagarake Chandira Tanda, Ondu Hennina Kathe, T.G. Lingappa, R.N. Jayagopal, 1972, Rajesh, Jayanti, Rajamma, Sudarshan, B.V. Radha

ಅಪರಾಧಿ : ನಗುವ ನಿನ್ನ ಮೊಗದ ಚೆನ್ನ : Naguva Ninna Mogada Chenna

ಹಾಡು: ನಗುವ ನಿನ್ನ ಮೊಗದ ಚೆನ್ನ 
ಚಲನಚಿತ್ರ: ಅಪರಾಧಿ
ಸಂಗೀತ ನಿರ್ದೇಶಕರು: ಸತ್ಯಂ
ಕವಿ: 
ಚಿ. ಉದಯಶಂಕರ್
ವರ್ಷ: 1976
ಹಾಡುಗಾರರು: 
ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಸುಶೀಲಾ
ಪಾತ್ರದಾರಿಗಳು: ಶ್ರೀನಾಥ್, ಆರತಿ, ಬಾಲಕೃಷ್ಣ
ಚಿತ್ರದ ನಿರ್ದೇಶಕರು: ವೈ.ಆರ್. ಸ್ವಾಮಿ

ನಿರ್ಮಾಪಕರು: ಓಂ ಶಕ್ತಿ ಕ್ರಿಯೇಷನ್ಸ್ (ಎಸ್. ಹೀರಾ)

ಗಂಡು: ನಗುವ ನಿನ್ನ ಮೊಗದ ಚೆನ್ನ ಒಲವನು ಕೋರಿದೆ 
ಹೆಣ್ಣು: ಮಾತಲೆ ನನ್ನ ಮೈ ಚೆಲುವನ್ನ ಹೊಗಳದೆ ಚೆನ್ನ ಬಾರೊ 
ಗಂಡು: ನಗುವ ನಿನ್ನ ಮೊಗದ ಚೆನ್ನ ಒಲವನು ಕೋರಿದೆ ||ಪ||

ಗಂಡು: ಸ್ನೇಹಕೆ ಮನಸಿಂದು ಸೋಲುತಿದೆ 
ಆಸೆಯು ನನ್ನನೆ ತೇಲಿಸಿದೆ 
ಏಕೊ ಏನೊ ಎಲ್ಲ ಹೊಸದಾಗಿದೆ ||೧||

ಹೆಣ್ಣು: ಹೊಳೆಯುವ ಕಣ್ಣಾಸೆ ಕೇಳಿದೆಯ 
ಹವಳದ ತುಟಿಗಾಸೆ ಬಾ ಇನಿಯ
ಯಾರು ಇಲ್ಲ ಇಲ್ಲಿ ನೀ ಕಾಣೆಯ ||೨||

ಗಂಡು: ಕೆಣಕುವ ಮಾತಿಂದ ಕಾಡಿರುವೆ 
ಸರಸಕೆ ಬಾ ಎಂದು ಕೂಗಿರುವೆ
ಇನ್ನು ನನ್ನ ಆಟ ನೀ ನೋಡುವೆ  ||೩||

Labels: Naguva Ninna Mogada Chenna, Aparadhi, Satyam, Chi. Udayashankar, 1976, Srinath, Arati, Balakrishna

ಮಹಾತ್ಯಾಗ : ಈ ಬಾಳಗೀತೆಗೆ ಎಂದೂ : Ee Balageetege Endu

ಹಾಡು: ಈ ಬಾಳಗೀತೆಗೆ ಎಂದೂ
ಚಲನಚಿತ್ರ: ಮಹಾತ್ಯಾಗ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಆರ್.ಎನ್. ಜಯಗೋಪಾಲ್

ವರ್ಷ: 1974
ಹಾಡುಗಾರರು: 
ಎಸ್. ಜಾನಕಿ, ರಾಮಕೃಷ್ಣ
ಪಾತ್ರದಾರಿಗಳು: ಆರತಿ, ನಂದಕಿಶೋರ್, ಲೀಲಾವತಿ, ವಿಜಯಕಲಾ
ಚಿತ್ರದ ನಿರ್ದೇಶಕರು: ಮಾರುತಿ ಶಿವರಾಂ

ನಿರ್ಮಾಪಕರು: ಮಾರುತಿ ಫಿಲಂಸ್ (ಎಂ.ಎಸ್.ಅರ್. ಸ್ವಾಮಿ)

ಈ ಬಾಳಗೀತೆಗೆ ಎಂದೂ ಶೃತಿಯಾದೆ ನೀನೂ 
ಶೃತಿಯಲ್ಲಿ ನಾದವಾಗೀ ಬೆರೆತುಹೋದೆ ನಾನೂ ||ಪ||

ಸಪ್ತಸ್ವರ ರಾಗದಲ್ಲಿ ಅನುರಾಗ ತಂದೆ
ನನ್ನೆದೆಯ ತಾಳದಲ್ಲಿ ಆವೇಗ ತಂದೆ 
ಬದುಕೆಂಬ ಬಾನಿನಲ್ಲಿ ಹೊಂಗಿರಣ ತಂದೆ
ಈ ಪ್ರೇಮದ ಮನದೆ ನೆಲೆಯಾಗಿ ನಿಂದೆ
ಈ ನನ್ನ ಮನ ನಿಂದಾದ ಉಸಿರೊಂದಾದ ಆ ಕ್ಷಣದಂದೆ ||೧||

ಅಂಬಿಗನು ನೀನಾಗಿ ಈ ದೋಣಿ ತೇಲಲಿ
ಆನಂದ ಸಾಗರದ ತೀರವನು ಸೇರಲಿ
ಆಸರೆಯು ನೀನಾಗಿ ಈ ಬಳ್ಳಿ ಬಾಳಲಿ
ನೀನೆರೆದ ಪ್ರೀತಿಯಿಂದ ಭೂತಳೆದು ನಿಲ್ಲಲಿ
ಕೈ ಬಿಡದೆ ನಡೆ ನೀ ಮುಂದು ಜೊತೆ ನಾನೆಂದು ಜೀವನದಲ್ಲಿ  ||೨||

Labels: Ee Balageetege Endu, Mahatyaga, Rajan-Nagendra, R.N. Jayagopal, 1974, Arati, Nandakishore, Leelavati, Vijayakala

ಅವಳಿ ಜವಳಿ : ಸರಸದ ಈ ಪ್ರತಿನಿಮಿಷ : Sarasada Ee Prati Nimisha

ಹಾಡು: ಸರಸದ ಈ ಪ್ರತಿನಿಮಿಷ 
ಚಲನಚಿತ್ರ: ಅವಳಿ ಜವಳಿ
ಸಂಗೀತ ನಿರ್ದೇಶಕರು: ಸತ್ಯಂ
ಕವಿ: ದೊಡ್ಡರಂಗೇಗೌಡ

ವರ್ಷ: 1981
ಹಾಡುಗಾರರು: 
ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಪಾತ್ರದಾರಿಗಳು: ಶ್ರೀನಾಥ್, ಮಂಜುಳಾ, ರೇಖಾರಾವ್
ಚಿತ್ರದ ನಿರ್ದೇಶಕರು: ಎ.ವಿ. ಶೇಷಗಿರಿರಾವ್

ನಿರ್ಮಾಪಕರು: ಮೋಹನಮುರಳಿ ಪ್ರೊಡಕ್ಷನ್ಸ್ (ಪಿ. ಕೃಷ್ಣರಾಜ್)


ಸರಸದ ಈ ಪ್ರತಿನಿಮಿಷ 
ಸ್ವರಸ್ವರವೂ ನವಮೋಹನ ರಾಗ ||ಪ||

ಎಸ್.ಜಾನಕಿ: ಬರೆದವರಾರು ಒಲವಿನ ಕಾವ್ಯ 
ಮಿಲನವೊ ವಿರಹವೊ ಎಲ್ಲವು ನವ್ಯ 
ಎಸ್.ಪಿ. : ಚೆಲುವಿನ ಪೂಜೆ ದಿನದಿನ ಭವ್ಯ 
ಪ್ರಣಯವೊ ವಿರಸವೊ ಎಲ್ಲವು ದಿವ್ಯ 
ಇಬ್ಬರೂ : ಶೃತಿಶೃತಿಯ ಗತಿಯಲ್ಲಿ ಈ ಮೋಹನರಾಗ ||೧||

ಎಸ್.ಜಾನಕಿ: ಮನಸಿನ ಭಾವ ಮಧುಮಯವಾಗಿ 
ನಲಿವಲಿ ನಗುತಿರೆ ಬಾರದು ಹೀಗೆ 
ಎಸ್.ಪಿ. : ಬೆಸುಗೆಯ ತಂದ ಪ್ರಣಯಮ ಬಂಧ 
ಮಧುರವೊ ಮಧುರವೊ ಎಲ್ಲವು ಅಂಧ 
ಇಬ್ಬರೂ : ತುಟಿತುಟಿಯೆ ಸುಧೆಯುಂತೆ ಈ ಮೋಹನರಾಗ  ||೨||

Labels: Sarasada Ee Prati Nimisha, Avali Javali, Satyam, Doddarangegowda, 1981, Srinath, Manjula, Rekha Rao

ಅವಳಿ ಜವಳಿ : ರೋಮಾಂಚನ ನಲ್ಮೆ ಜೀವನ : Romanchana Nalme Jivana

ಹಾಡು: ರೋಮಾಂಚನ ನಲ್ಮೆ ಜೀವನ 
ಚಲನಚಿತ್ರ: ಅವಳಿ ಜವಳಿ
ಸಂಗೀತ ನಿರ್ದೇಶಕರು: ಸತ್ಯಂ
ಕವಿ: ದೊಡ್ಡರಂಗೇಗೌಡ

ವರ್ಷ: 1981
ಹಾಡುಗಾರರು: 
ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಸುಶೀಲಾ
ಪಾತ್ರದಾರಿಗಳು: ಶ್ರೀನಾಥ್, ಮಂಜುಳಾ, ರೇಖಾರಾವ್
ಚಿತ್ರದ ನಿರ್ದೇಶಕರು: ಎ.ವಿ. ಶೇಷಗಿರಿರಾವ್

ನಿರ್ಮಾಪಕರು: ಮೋಹನಮುರಳಿ ಪ್ರೊಡಕ್ಷನ್ಸ್ (ಪಿ. ಕೃಷ್ಣರಾಜ್)


ರೋಮಾಂಚನ ನಲ್ಮೆ ಜೀವನ 
ಅನುರಾಗದ ವೀಣ ನುಡಿಸಿದೆ ಗಾನ 
ಕ್ಷಣಕ್ಷಣ ಒಲವಿನ ಧ್ಯಾನ ||ಪ||

ಪಿ.ಸುಶೀಲಾ : ಪ್ರಣಯದ ತಾಣ ಸರಸದ ತ್ರಾಣ 
ತನುಮನ ಭಾವನೆ ಹೊಂಗಿರಣ 
ಎಸ್.ಪಿ. : ತುಟಿಗಳ ಪಾನ ಸುರತದ ಜೇನ 
ದಿನದಿನ ಕಾಮನೆ ಸಿಹಿ ಚುಂಬನ 
ಪಿ.ಸುಶೀಲಾ : ಮಿನುಗುತ ನಾಟಿದೆ ಮದನನ ಬಾಣ 
ಎಸ್.ಪಿ. : ಮಿನುಗುತ ನಾಟಿದೆ ಮದನನ ಬಾಣ ||೧||

ಎಸ್.ಪಿ. : ಹೃದಯದ ಗಾನ ತುಡಿದಿದೆ ಪ್ರಾಣ 
ಬಯಕೆಯ ಬಾಳಿನ ಸವಿ ನಂದನ 
ಪಿ.ಸುಶೀಲಾ : ಮಿಲನದ ಮೌನ ಅರಿತರೆ ಜಾಣ 
ಕಣಕಣ ಪ್ರೇರಣೆ ಸಿಹಿ ಚೇತನ 
ಎಸ್.ಪಿ. : ಮುಗಿಯದೆ ಸಾಗಿದೆ ಮಧುಮಯ ಯಾನ 
ಪಿ.ಸುಶೀಲಾ : ಮುಗಿಯದೆ ಸಾಗಿದೆ ಮಧುಮಯ ಯಾನ  ||೨||

Labels: Romanchana Nalme Jivana, Avali Javali, Satyam, Doddarangegowda, 1981, Srinath, Manjula, Rekha Rao

ಮರಳಿ ಗೂಡಿಗೆ : ನೀ ನುಡಿಯದಿರಲೇನು : Nee Nudiyadiralenu

ಹಾಡು: ನೀ ನುಡಿಯದಿರಲೇನು 
ಚಲನಚಿತ್ರ: ಮರಳಿ ಗೂಡಿಗೆ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಕೆ.ಎಸ್. ನಿಸಾರ್ ಅಹ್ಮದ್

ವರ್ಷ: 1984
ಹಾಡುಗಾರರು: ಎಸ್.ಪಿ. ಬಾಲಸುಬ್ರಹ್ಮಣ್ಯಂ

ಪಾತ್ರದಾರಿಗಳು: ಕಲ್ಯಾಣ್ ಕುಮಾರ್, ಪೂರ್ಣಿಮಾ, ರೂಪಾದೇವಿ
ಚಿತ್ರದ ನಿರ್ದೇಶಕರು: ಶಾಂತಾರಾಮ್

ನಿರ್ಮಾಪಕರು: ಶ್ರೀ ಗುರುಶರಣಂ ಫಿಲಂಸ್ (ಬಾಲಾಜಿ)


ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ 
ಕಣ್ಣಂಚಿನ ಕೊನೆಯ ಭಾವದಲ್ಲಿ
ಬಗೆ ನೋವ ಭಾರಕ್ಕೆ ಬಳಲಿರುವ ಮೊಗವಿಹುದು 
ಕಾರ್ಮೋಡದಾಗಸದ ರೀತಿಯಲ್ಲಿ ||ಪ||

ಬಾಡಿರುವ ಮೊಗದಲ್ಲಿ ಕಳೆಯಿರದ ಕಣ್ಣಲ್ಲಿ 
ನಿನ್ನ ಸಿರಿವಂತಿಕೆಯ ಕಾಣುವಾಸೆ 
ಸೊಗವಿರದ ತುಟಿಯಲ್ಲಿ ತೂಗಿರುವ ನಗೆಯಲ್ಲಿ 
ಚೆಲುಗನಸಿನಿರುಳುಗಳ ಹುಡುಕುವಾಸೆ ||೧|| 

ಅರೆ ಗಳಿಗೆ ಸುಖಸ್ವಪ್ನ ಬರಲಾರದೆನ್ನೊಡನೆ 
ವಾಸ್ತವತೆ ಗಹಗಹಿಸಿ ಸೆಳೆಯಲಿಹುದು 
ಮರೆತೆಲ್ಲ ಕೊನೆಗೊಮ್ಮೆ ಮನಬಿಚ್ಚಿ ನಕ್ಕುಬಿಡು
ಬೇರೆ ಹಾದಿಯ ನಾವು ಹಿಡಿಯಬಹುದು  ||೨||

Labels: Nee Nudiyadiralenu, Marali Gudige, Rajan-Nagendra, K.S. Nisar Ahmed, 1984, Kalyan Kumar, Poornima, Roopadevi

ಅನುರಾಗ ಬಂಧನ : ನಿನ್ನ ಸವಿನೆನಪೆ : Ninna Savi Nenape

ಹಾಡು: ನಿನ್ನ ಸವಿನೆನಪೆ
ಚಲನಚಿತ್ರ: ಅನುರಾಗ ಬಂಧನ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ವಿಜಯನಾರಸಿಂಹ
ವರ್ಷ: 1978
ಹಾಡುಗಾರರು: ಎಸ್. ಜಾನಕಿ

ಪಾತ್ರದಾರಿಗಳು: ಕಲ್ಯಾಣ್ ಕುಮಾರ್, ಆರತಿ, ಕಲ್ಪನಾ, ವಸಂತ ಕುಮಾರ್ ಪಾಟೀಲ್
ಚಿತ್ರದ ನಿರ್ದೇಶಕರು: ಗೀತಪ್ರಿಯ

ನಿರ್ಮಾಪಕರು: ಬಿ.ಪಿ. ಫಿಲಂಸ್

ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ 
ಪ್ರೀತಿಯ ಸವಿಮಾತೆ ಉಪಾಸನೆ 
ನಿನ್ನ ಸಂಗದಲಿ ಅಂಗಾಂಗ ಮಿಂಚಾಯಿತು 
ಶೃಂಗಾರ ರಸಧಾರೆ ಹುಯಿಲಾಯಿತು ||ಪ||

ಹೂಬಾಣ ಹೂಡಲು ಕಾಮನಬಿಲ್ಲು 
ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು 
ಉಸಿರಾಟ ನೀನು ಬಿಸಿ ಮಿಡುಕಾಟ ನಾನು 
ನಿನ್ನಲಿ ನಾ ಮರುಳಾದೆನು ನೀನೆ ಈ ಬಾಳ ಬಾನು ||೧||

ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ 
ನೀ ತಂದೆ ರಸಕಾವ್ಯ ಸವಿ ಮುನ್ನುಡಿ 
ಮನ ತುಂಬ ನೀನು ನಿನ್ನ ಪ್ರತಿಬಿಂಬ ನಾನು 
ನಿನ್ನ ವಿನಾ ನಾ ಬಾಳೆನು 
ಇನ್ನು ದಯೆ ಬಾರದೇನು 
ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ 
ಬಾಳಲಿ ಬೆಳಕಾಗು ಮಹೇಶ್ವರ 
ನಮ್ಮ ಕೈಹಿಡಿದು ಕಾಪಾಡು ಕರುಣಾಕರ 
ನನ್ನಲ್ಲಿ ದಯೆಮಾಡು ಶಿವಶಂಕರ ||೨||

Labels: Ninna Savi Nenape, Anuraga Bandhana, Rajan-Nagendra, Vijaya Narasimha, 1978, Kalyan Kumar, Arati, Kalpana, Vasant Kumar Patil

ವಿಜಯವಾಣಿ : ಮಧುಮಾಸ ಚಂದ್ರಮಾ : Madhumasa Chandrama

ಹಾಡು: ಮಧುಮಾಸ ಚಂದ್ರಮಾ
ಚಲನಚಿತ್ರ: ವಿಜಯವಾಣಿ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಚಿ. ಉದಯಶಂಕರ್

ವರ್ಷ: 1976
ಹಾಡುಗಾರರು: ಎಸ್. ಜಾನಕಿ, ವಾಣಿ ಜಯರಾಂ

ಪಾತ್ರದಾರಿಗಳು: ಶ್ರೀನಾಥ್, ಕಲ್ಪನಾ, ಅಶೋಕ್, ಹೇಮಾಚೌಧರಿ, ದ್ವಾರಕೀಶ್
ಚಿತ್ರದ ನಿರ್ದೇಶಕರು: ಎನ್. ವೆಂಕಟೇಶ್

ನಿರ್ಮಾಪಕರು: ವಾಸುಕಿ ಫಿಲಂಸ್ (ರಾಜಾಶಂಕರ್)


ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ 
ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ ||ಪ||

ನಾ ಪ್ರೇಮದರಮನೆಯಲ್ಲಿ ವೈಭೋಗ ಸಿರಿಯನು ಕಂಡೆ
ನನ್ನೆದೆಯ ಸಿಂಹಾಸನದಿ ನೀ ರಾಜ್ಯವಾಳಿದೆ
ನೀ ನನ್ನ ಬಾಳಿನ ಪುಟದೆ ಅನುರಾಗ ಕವಿತೆಯ ಬರೆದೆ
ನಾನಾಗ ಭಾವದ ಹೊಳೆಯಾ ಅಲೆಯಲ್ಲಿ ತೇಲಿದೆ 
ಅಲೆಯಲ್ಲಿ ತೇಲಿ ತೇಲಿದೆ ||೧||

ರಸಪೂರ್ಣ ಮೈತ್ರಿಯ ಸಮಯ ನೂರಾಸೆ ಕಡಲಿದು ಹೃದಯ
ನೀ ನಡೆಸು ಅಂಬಿಗನಾಗಿ ಒಲವೆಂಬ ನೌಕೆಯ
ಬಂಗಾರ ತೇರನು ಏರಿ ನಾ ನಿನ್ನ ಸಂಗದಿ ಬೆರೆವೆ 
ಸುಖವೆಂಬ ಉಯ್ಯಾಲೆಯಲಿ ಸಖ ನಿನ್ನಾ ತೂಗುವೆ
ಹಾಯಾಗಿ ತೂಗಿ ಕೂಗುವೆ ||೨||

Labels: Madhumasa Chandrama, Vijayavani, Rajan-Nagendra, Chi. Udayashankar, 1976, Srinath, Kalpana, Ashok, Hema Choudhari, Dwarakish

ಕಾಂಚನ ಮೃಗ : ಹೂ ಬನದಲೀ : Hu Banadali

ಹಾಡು: ಹೂ ಬನದಲೀ
ಚಲನಚಿತ್ರ: ಕಾಂಚನ ಮೃಗ 
ಸಂಗೀತ ನಿರ್ದೇಶಕರು: ಅಶ್ವಥ್-ವೈದಿ
ಕವಿ: 
ವಿಜಯನಾರಸಿಂಹ
ವರ್ಷ: 1981
ಹಾಡುಗಾರರು: ಎಸ್.ಪಿ. ಬಾಲಸುಬ್ರಹ್ಮಣ್ಯಂ

ಪಾತ್ರದಾರಿಗಳು:
ಚಿತ್ರದ ನಿರ್ದೇಶಕರು: 

ನಿರ್ಮಾಪಕರು: 


ಹೂ ಬನದಲೀ ನಗುವು ಸುಮದಲೀ
ಪ್ರೀತೀ ಹಾಡಲೀ ತಾನ ಮೂಡಲೀ ||ಪ||

ಶೃಂಗಾರ ಕಾವ್ಯ ಭಾವ ಮೈತಾಳಿ ಬಂದಿತೋ
ಸಂಗೀತ ರಾಗ ಲಾಸ್ಯ ಈ ಜೀವ ತುಂಬಿತೋ
ಮಧು ಋತುವು ನಗು ನಗುತ ಲಾವಣ್ಯ ತಂದಿತೋ
ಈ ಚೆಲುವ ಈ ಒಲವ ಕವಿ ಹಾಡು ಕಂಡಿತೋ ||೧||

ಹೂ ಮಂಚದಲ್ಲಿ ಅಂದ ಆನಂದ ತೂಗಿತೋ
ರೋಮಾಂಚದಲ್ಲಿ ಕಾಲ ಇಲ್ಲೇನೆ ನಿಂತಿತೋ
ಮಧುಲತೆಯು ವಧುವಾಗಿ ಸೌಂದರ್ಯ ಹೊಮ್ಮಿತೋ
ಮಧಿರೆಯದು ನಯನದಲಿ ರತಿಯಂತೆ ಬಂದಿತೋ  ||೨||

Labels: Hu Banadali, Kanchana Mriga, Ashwath-Vaidi, Vijaya Narasimha,  1981

ಕಾಂಚನ ಮೃಗ : ಈ ಸವಿದಿನ : Ee Savidina

ಹಾಡು: ಈ ಸವಿದಿನ
ಚಲನಚಿತ್ರ: ಕಾಂಚನ ಮೃಗ 
ಸಂಗೀತ ನಿರ್ದೇಶಕರು: ಅಶ್ವಥ್-ವೈದಿ
ಕವಿ: 
ವಿಜಯನಾರಸಿಂಹ
ವರ್ಷ: 1981
ಹಾಡುಗಾರರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ಪಾತ್ರದಾರಿಗಳು:
ಚಿತ್ರದ ನಿರ್ದೇಶಕರು: 

ನಿರ್ಮಾಪಕರು: 

ಈ ಸವಿದಿನ ಎಂದೆಂದು ಮರೆಯೆ ನಾ 
ಒಲವಿನ ಸ್ಪಂದನ ಎಂಥ ಬಂಧನ ||ಪ||

ಗಂಡು: ಹೊಸ ಹರೆಯ ಬಿಸಿ ಬಯಕೆ ಹೊಸಿಲ ಮೇಲಿದೆ 
ನಸು ನಗೆಯ ನವ ಭಾವ ನಮದೆ ಆಗಿದೆ 
ಕನಸು ನಿನ್ನೆಗೆ ನನಸು ಇಂದಿಗೆ ||೧||

ಹೆಣ್ಣು: ಸರಸಮಯ ರಸ ನಿಮಿಷ ಹರುಷ ತುಂಬಿದೆ 
ಮೃದು ಮನದ ಅನುರಾಗ ಬೆಸುಗೆ ತಂದಿದೆ 
ಸುಖದ ಸ್ನೇಹಕೆ ಸುಧೆಯ ಕಾಣಿಕೆ ||೨||

Labels: Ee Savidina, Kanchana Mriga, Ashwath-Vaidi, Vijaya Narasimha,  1981

ತ್ರಿವೇಣಿ : ನೀನಾ ಭಗವಂತ : Neena Bhagavanta

ಹಾಡು: ನೀನಾ ಭಗವಂತ 
ಚಲನಚಿತ್ರ: ತ್ರಿವೇಣಿ 
ಸಂಗೀತ ನಿರ್ದೇಶಕರು: ಉಪೇಂದ್ರ ಕುಮಾರ್
ಕವಿ: ಹಂಸಲೇಖ

ವರ್ಷ: 1973
ಹಾಡುಗಾರರು: 
ಜಿ.ಬಾಲಕೃಷ್ಣ, ಎಚ್.ಪಿ ಗೀತ
ಪಾತ್ರದಾರಿಗಳು: ಉದಯಕುಮಾರ್, ಕಲ್ಪನಾ
ಚಿತ್ರದ ನಿರ್ದೇಶಕರು: 
ಎಂ.ಎನ್.ಪ್ರಸಾದ್

ನಿರ್ಮಾಪಕರು: ನಾಗರಾಜ ಆರ್ಟ್ಸ್ ಪ್ರೊಡಕ್ಶನ್ಸ್ (ಡಿ.ಜಿ. ನಾಗರಾಜ್)

ನೀನಾ ಭಗವಂತ ನೀನಾ ಭಗವಂತ
ಜಗಕುಪಕರಿಸಿ ನನಗಪಕರಿಸೊ ಜಗದೋದ್ಧಾರಕ ನೀನೇನಾ 
ನೀನೇನಾ ನೀನಾ ಭಗವಂತ ||ಪ||

ಗೋರ್ಕಲ್ಲಿಗೆ ಗುಡಿ ಮಂದಿರ ನೂರು 
ಮಾಡಿದ ನರನಿಗೆ ನೆಲೆಯಿಲ್ಲ 
ಹೂ ಸೌಗಂಧವ ಲೇಪಿಸಿ ಹಾಡಿ 
ಕರೆದರು ಕರುಣಿಸೆ ಕೃಪೆಯಿಲ್ಲ 
ನೀನಾ ಭಗವಂತ ||೧||

ನಂದನ ಬದುಕು ನರಕ ಮಾಡಿದರೂ
ಸ್ವರ್ಗಕೆ ಒಯ್ಯುವ ಮನಸಿಲ್ಲ
ಹಾಲಾಹಲದ ವಾನಲ ದೂಡಿ
ನಶಿಸದರೂ ನೀ ಕಂಡಿಲ್ಲ
ನೀನಾ ಭಗವಂತ ||2||

ನಶ್ವರ ಭೋಗದ ಆಸೆ ಕಡಲಲಿ 
ತೇಲಿಸಿ ಮುಳುಗಿಸಲೇಕಯ್ಯ 
ಅಂತರ ತಿಳಿಯದೆ ಪಾಲಿಸುವವಗೆ 
ದೈವೋತ್ತಮ ಬಿರುದೇಕಯ್ಯ 
ನೀನಾ ಭಗವಂತ ||೩||

ಎಚ್.ಪಿ ಗೀತ : ಸಿರಿ ನಂದನ ಸಿರಿ ನಂದನ 
ಏನ ಕೇಳಲೆ ನಾ 
ಓ ದಯಾಳು ಬರಿದು ಬಾಳು 
ಕರುಣಿಸೊ ಎನಗು ಜೀವನ 
ಸಿರಿ ನಂದನ 

ಜನನ ಮರಣ ಬಾಳ ಪಥದಿ 
ಹರಿಸಿ ಸಾಗುವೆ ವಿನಾ 
ಕರುಣೆ ಮಮತೆ ತೋರಿ ಇಹದೆ 
ಸಲಹಿ ಕದಡುವೆ ಮನಾ 
ಇರುವೆ ಎಲ್ಲಿ ಶೂನ್ಯ ಜಗದಿ 
ಪ್ರಸರಿಸೊ ಶಾಂತನ 
ಸಿರಿ ನಂದನ ||೪||

Labels: Neena Bhagavanta, Triveni, Upendra Kumar, Hamsalekha,  1973, Udayakumar, Kalpana, Narasimharaju

ಗುರುವಾರ, ಜುಲೈ 3, 2014

ವಿಜಯೋತ್ಸವ : ಆಗಸಕೆ ಮೋಡ ಸಂಗಾತಿ : Agasake Moda Sangati

ಹಾಡು: ಆಗಸಕೆ ಮೋಡ ಸಂಗಾತಿ
ಚಲನಚಿತ್ರ: ವಿಜಯೋತ್ಸವ 
ಸಂಗೀತ ನಿರ್ದೇಶಕರು: ವಿಜಯಾನಂದ್
ಕವಿ: ಚಿ. ಉದಯಶಂಕರ್

ವರ್ಷ: 1987
ಹಾಡುಗಾರರು: ರಾಜಕುಮಾರ್ ಭಾರತಿ, ಚಿತ್ರಾ
ಪಾತ್ರದಾರಿಗಳು: ಕುಮಾರ್ ಬಂಗಾರಪ್ಪ, ಸುಧಾರಾಣಿ, ಸುದರ್ಶನ್, ಕಾಂಚನ
ಚಿತ್ರದ ನಿರ್ದೇಶಕರು: ದೊರೈ-ಭಗವಾನ್

ನಿರ್ಮಾಪಕರು: ನಿರುಪಮಾ ಆರ್ಟ್ ಕಂಬೈನ್ಸ್ (ಎಸ್.ಎ. ಗೋವಿಂದರಾಜು)


ಗಂಡು:ಆಗಸಕ್ಕೆ ಮೋಡ ಸಂಗಾತಿ 
ಆ ಲತೆಗೆ ಹೂವೆ ಸಂಗಾತಿ 
ಓ ನಲ್ಲೆ ನೀ ನನಗೆ ನೀ 
ಉಲ್ಲಾಸದಿಂದ ಆನಂದ ತಂದ 
ಸಂಗೀತದಿಂದ ಸಂತೋಷ ತಂದ ಸಂಗಾತಿಯಾಗಿರುವೆ ಓ

ಹೆಣ್ಣು: ಆಗಸಕೆ ಮೋಡ ಸಂಗಾತಿ 
ಆ ಲತೆಗೆ ಹೂವೆ ಸಂಗಾತಿ 
ಓ ನಲ್ಲ ನೀ ನನಗೆ ನೀ 
ಉಲ್ಲಾಸದಿಂದ ಅನಂದ ತಂದ 
ಸಂಗೀತದಿಂದ ಸಂತೋಷ ತಂದ ಸಂಗಾತಿಯಾಗಿರುವೆ ಓ ||ಪ||

ಗಂಡು: ನಯನಗಳು ಒಂದಾಗಿರೆ ಮನಸುಗಳು ಒಂದಾಗಿರೆ
ನೀನಾಡೊ ಮಾತ್ತೆಲ್ಲಾ ಮುತ್ತಂತೆ ತಾನೆ 
ನಿನ್ನಿಂದ ನಾ ಕಂಡೆ ಆ ಸ್ವರ್ಗವನ್ನೆ 
ಎಂದೆಂದು ಒಂದಾಗಿ ಬಾಳೊ ಆಸೆ ತಂದೆ ನನ್ನಲ್ಲಿ 
ಹೆಣ್ಣು: ಓ ||೧||

ಹೆಣ್ಣು: ಒಲವಿನಲಿ ಓಲಾಡಿದೆ ಕನಸಿನಲಿ ತೇಲಾಡಿದೆ 
ನನ್ನಾಸೆ ಪೂರೈಸೆ ಬಂದಾಗ ನೀನು 
ಹಣ್ಣಾದೆ ಈ ನಿನ್ನ ತೋಳಲ್ಲಿ ನಾನು 
ಪ್ರೀತಿಯ ರೀತಿ ಹೇಗೆಂದು ಇಂದು ಕಂಡೆ ನಲ್ಲ ನಿನ್ನಿಂದ 
ಗಂಡು: ಓ ||೨||

Labels: Agasake Moda Sangati, Vijayotsava, Vijayanand, Chi. Udayashankar,  1987, Kumar Bangarappa, Sudharani, Sudarshan, Kanchana